tag:blogger.com,1999:blog-5037422588330443368.post3443303904185931568..comments2022-11-19T04:46:06.144-08:00Comments on ಕಾಡಬೆಳದಿಂಗಳು: ವಿಜ್ಞಾನ ಮತ್ತು ಆಧ್ಯಾತ್ಮGodavarihttp://www.blogger.com/profile/02417236660138086946noreply@blogger.comBlogger8125tag:blogger.com,1999:blog-5037422588330443368.post-26232225953569994802021-06-20T00:45:56.489-07:002021-06-20T00:45:56.489-07:00ಸ್ವಾಮಿ ವಿವೇಕನಂದರು ಕೂಡ ಈ ಪುಸ್ತಕ ಓದಬೇಕೆಂದು ಹೇಳಿದ್ದಾರ...ಸ್ವಾಮಿ ವಿವೇಕನಂದರು ಕೂಡ ಈ ಪುಸ್ತಕ ಓದಬೇಕೆಂದು ಹೇಳಿದ್ದಾರೆ. ಏಕೆಂದರೆ ಅಧ್ಯಾತ್ಮ ಬಗ್ಗೆ ಸರಿಯಾದ ಜ್ಞಾನ ಬೇಕಿದಲ್ಲಿ ಈಗಿನ ಕಾಲದ ಜನರು ಈ ಕಾಪ್ರಾನ ಪ್ರಭಂದ ಓದಲೇ ಬೇಕೆಂದು ನನ್ನ ಅಭಿಪ್ರಾಯ.Anonymoushttps://www.blogger.com/profile/07888701523320058588noreply@blogger.comtag:blogger.com,1999:blog-5037422588330443368.post-70544723760585967332011-01-01T21:15:18.050-08:002011-01-01T21:15:18.050-08:00ಚಿತ್ರಾ ಅವರೇ,
ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು...ಚಿತ್ರಾ ಅವರೇ,<br /><br />ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು.Godavarihttps://www.blogger.com/profile/02417236660138086946noreply@blogger.comtag:blogger.com,1999:blog-5037422588330443368.post-33496846122693760492010-12-27T21:02:53.076-08:002010-12-27T21:02:53.076-08:00ಗೋದಾವರಿ ಅವರೇ...ತುಂಬಾ ಚೆನ್ನಾಗಿ ಬರೆಯುತ್ತೀರಿ
ದಯವಿಟ್ಟು...ಗೋದಾವರಿ ಅವರೇ...ತುಂಬಾ ಚೆನ್ನಾಗಿ ಬರೆಯುತ್ತೀರಿ<br />ದಯವಿಟ್ಟು ನಮ್ಮ ಪತ್ರಿಕೆಗೆ ಬರೆಯಿರಿ. ನಿಮ್ಮ ಮೇಲ್ ಐಡಿ ಇಲ್ಲ.ದಯವಿಟ್ಟು ನಮ್ಮ ಪತ್ರಿಕೆಯ hosasuppliment@gmail.comಗೆ ಒಂದು ಮೇಲ್ ಮಾಡಿ.<br />-ಚಿತ್ರಾ ಸಂತೋಷ್<br />ಹಿರಿಯ ಉಪಸಂಪಾದಕಿ<br />ಹೊಸದಿಗಂತ ಕನ್ನಡ ದಿನ ಪತ್ರಿಕೆಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-5037422588330443368.post-63230149159774008702010-09-29T05:08:53.088-07:002010-09-29T05:08:53.088-07:00ಸುನಾಥ್ ಅವರೇ,
ನೀವು ಹೇಳಿರುವುದು ನಿಜ. ಕೆಲವೊಮ್ಮೆ ವಿಜ್...ಸುನಾಥ್ ಅವರೇ,<br /> <br />ನೀವು ಹೇಳಿರುವುದು ನಿಜ. ಕೆಲವೊಮ್ಮೆ ವಿಜ್ಞಾನ ಮತ್ತು ಆಧ್ಯಾತ್ಮ ಒಂದೇ ಎಂದು ಕಾಣುವಂತಹ ಮಾತನ್ನು ಹೇಳಿದರೂ ಸಹ, ಅವು ಗುಣದಲ್ಲಿ ಬೇರೆಯೇ ಆಗಿರುತ್ತವೆ. Scientific ವಿಚಾರಧಾರೆ ಆಧ್ಯಾತ್ಮಕ್ಕೆ ತೀರ ಹೊರತಾದದ್ದು ಎಂಬ ಸಾಮಾನ್ಯ ಕಲ್ಪನೆ ನಮ್ಮಲ್ಲಿದೆ. ಆದರೆ ವಿಜ್ಞಾನಕ್ಕೂ ಒಬ್ಬ ವ್ಯಕ್ತಿಯಲ್ಲಿ, ಆಧ್ಯಾತ್ಮದಲ್ಲಿ ಅಭಿರುಚಿಯನ್ನು ಬೆಳೆಸುವ ಮತ್ತು ಅವನನನ್ನು ಆಂತರ್ಯದೆಡೆಗೆ ಸೆಳೆಯುವ ಸಾಮರ್ಥ್ಯವಿದೆ ಎಂಬುದನ್ನು ನನ್ನ ಲೇಖನದಲ್ಲಿ ಹೇಳಲು ಪ್ರಯತ್ನಿಸಿದ್ದೇನೆ. <br /> <br />ರಾಘವೇಂದ್ರರೇ,<br />ಅತ್ಯಂತ ಸಮಂಜಸವಾದ ವಿವರಣೆಯನ್ನು ನೀಡಿದ್ದೀರಿ. ವಿಜ್ಞಾನದ ಪ್ರಯೋಗಗಳು ಬಾಹ್ಯ ಪ್ರಯೋಗಗಳು, ಅದಕ್ಕಾಗಿಯೇ ವಿಜ್ಞಾನದಲ್ಲಿ ಹಿಂದಿನ ವೈಜ್ಞಾನಿಕ ಸಂಶೋಧನೆಗಳ ಮೇಲೆ ಇಂದು ವಿಜ್ಞಾನದ ಮಾರ್ಗ ನಿರ್ಧಾರವಾಗುತ್ತದೆ. ಆದರೆ ಆಧ್ಯಾತ್ಮ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಪ್ರಯೋಗವೂ ನೂತನ ಮತ್ತು ಸ್ವತಂತ್ರ. <br /> <br />ನಿಮ್ಮ ಸಲಹೆಗೆ ಧನ್ಯವಾದಗಳು. ಇನ್ನೂ ಇಂಟರೆಸ್ಟಿಂಗ್ ಆಗಿ ಬರೆಯಲು ಪ್ರಯತ್ನಿಸುತ್ತೇನೆ.Godavarihttps://www.blogger.com/profile/02417236660138086946noreply@blogger.comtag:blogger.com,1999:blog-5037422588330443368.post-30160451865378086842010-09-26T08:30:58.572-07:002010-09-26T08:30:58.572-07:00ಸಮರ್ಪಕ ವಿವರಣೆಗಾಗಿ ರಾಘವೇಂದ್ರರಿಗೆ ಧನ್ಯವಾದಗಳು.ಸಮರ್ಪಕ ವಿವರಣೆಗಾಗಿ ರಾಘವೇಂದ್ರರಿಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5037422588330443368.post-45684864078018378512010-09-25T08:59:05.665-07:002010-09-25T08:59:05.665-07:00ಗೋದಾವರಿಯವರೇ,
ಈ ಲೇಖನವನ್ನ ಇನ್ನೂ ಸ್ವಲ್ಪ ಇಂಟರೆಸ್ಟಿಂಗ್ ...ಗೋದಾವರಿಯವರೇ,<br />ಈ ಲೇಖನವನ್ನ ಇನ್ನೂ ಸ್ವಲ್ಪ ಇಂಟರೆಸ್ಟಿಂಗ್ ಆಗಿ ಬರೆಯಬಹುದಿತ್ತು.<br /><br />ಸುನಾಥ್ ಸರ್ಗೆ,<br />ಕ್ವಾಂಟಮ್ ಮೆಕ್ಯಾನಿಕ್ಸ್ ಟೈಮ್ ಮತ್ತು ಸ್ಪೇಸ್ ಎರಡೂ ಬೇರೆಯಲ್ಲ, ಅವೆರಡೂ ಒಂದೇ ಎಂದು ಹೇಳುತ್ತದೆ, ಅಷ್ಟೇ ಅಲ್ಲ, ಐನ್ಸ್ಟೈನ್ ಸಹಾ ಕಾಲ ಮತ್ತು ಅವಕಾಶ ಎರಡೂ ಮಿಥ್ಗಳು ಅಥವಾ ಅವುಗಳು ಇಲ್ಲ ಎಂಬುದನ್ನೇ ಹೇಳುತ್ತಾನೆ. ವಿಜ್ಞಾನ ಒಡೆದು ನೋಡುತ್ತಾ, ಒಡೆದು ನೋಡುತ್ತಾ ಒಂದು ಹಂತದಲ್ಲಿ ಇನ್ನು ಒಡೆಯುವುದು ಸಾಧ್ಯವಿಲ್ಲ ಅನ್ನುವ ಹಂತಕ್ಕೆ ಬಂದಾಗ ಎಲ್ಲವೂ ಒಂದಕ್ಕೊಂದು ಸೇರಿ ಎಲ್ಲವೂ ಒಂದೇ ಅನ್ನುವುದನ್ನು ಕಂಡುಕೊಂಡು ಆ ಅಚ್ಚರಿಯಲ್ಲಿ ಹೇಳಿದ ಮಾತು ಅದು. ಆದರೆ ಐನ್ಸ್ಟೈನ್ ಅಥವಾ ಅತನ ನಂತರ ಬಂದ ವಿಜ್ಞಾನಿಗಳು ಏನನ್ನು ಕಂಡುಕೊಳ್ಳುತ್ತಾರೆ ಅದು ಬಹುಶಃ ಯಶೋದೆ ಕೃಷ್ಣನ ಬಾಯಲ್ಲಿ ಬ್ರಹ್ಮಾಂಡವನ್ನು ನೋಡಿದ ರೀತಿ ಇರಬಹುದು ಅನ್ನಿಸುತ್ತದೆ. ಆದರೆ ಅದು ಬಾಹ್ಯದ ಪ್ರಯೋಗಗಳಿಂದ ದೊರೆತದ್ದು. ಅದರಿಂದ ದೊರಕಿದ್ದು ಕೇವಲ ಒಂದು ಅತಿ ಚಿಕ್ಕ ದೃಷ್ಠಿಯಷ್ಟೇ. <br /><br />ಆದರೆ ಶಂಕರರು ಅದನ್ನು ತಮ್ಮ ಸಂಪೂರ್ಣ ಅನುಭವದ ಪ್ರತಿಸ್ಪಂದನೆಯಾಗಿ ಹೇಳುತ್ತಾರೆ ಎಂದು ನನಗನ್ನಿಸುತ್ತದೆ. ಅಂದರೆ ಅವರು ಯಾವ ವಿಶ್ವದಲ್ಲಿ ಎಲ್ಲವೂ ಒಂದೇ ಆಗಿದೆಯೋ ಅದರಲ್ಲಿ ಅವರೂ ಒಂದಾಗಿ, ತಾನೇ ಅದೆಲ್ಲವೂ ಎಂದು ಕಂಡುಕೊಂಡು ಹೇಳುತ್ತಾರೆ. ಇನ್ನು, ಮನಸ್ಸು ಎಲ್ಲಿಯವರೆಗೆ ಅರಿವಿನ (consciousness) ಸುತ್ತ ಆಚ್ಛಾದಿತವಾಗಿರುತ್ತದೆಯೋ ಅಲ್ಲಿಯವರೆಗೆ ಅದು ಕಾಲ ಮತ್ತು ಅವಕಾಶದ ಭ್ರಮೆಯನ್ನು ನಿರ್ಮಿಸುತ್ತಲೇ ಇರುತ್ತದೆ. ಆದರೆ ಆ ಮನೋಮಾಯೆಯನ್ನು ಮೀರಿದವರಿಗೆ ಕಾಲವೂ ಅವಕಾಶವೂ ಮಾಯೆಯೇ ಎಂದು ಕಾಣುತ್ತದೆ ಎಂದು ಶಂಕರರು ಹೇಳುತ್ತಾರೆ. <br /><br />ವಿಜ್ಞಾನಕ್ಕೂ ಆಧ್ಯಾತ್ಮಕ್ಕೂ ಇರುವ ವ್ಯತ್ಯಾಸವೆಂದರೆ, ಬ್ರಹ್ಮಾಂಡವೆಲ್ಲವೂ ಒಂದೇ ಎಂದು ವಿಜ್ಞಾನಿ ಹೇಳಬಹುದು, ಆದರೆ ಶಂಕರರಂತವರು ಮಾತ್ರ ನಾನೇ ಬ್ರಹ್ಮಾಂಡ ಎಂದು ಹೇಳಬಲ್ಲರು.Anonymousnoreply@blogger.comtag:blogger.com,1999:blog-5037422588330443368.post-80888836739524796272010-09-25T08:50:43.940-07:002010-09-25T08:50:43.940-07:00This comment has been removed by the author.Anonymousnoreply@blogger.comtag:blogger.com,1999:blog-5037422588330443368.post-65084095685244491462010-09-25T02:57:58.963-07:002010-09-25T02:57:58.963-07:00ಗೋದಾವರಿಯವರೆ,
ಬಹಳ ದಿನಗಳ ಬಳಿಕ ಬ್ಲಾಗ್ ಬರಹ ನೀಡಿದ್ದೀರಿ....ಗೋದಾವರಿಯವರೆ,<br />ಬಹಳ ದಿನಗಳ ಬಳಿಕ ಬ್ಲಾಗ್ ಬರಹ ನೀಡಿದ್ದೀರಿ. ಆದರೆ ನೀಡಿದ ಲೇಖನವು ಮೌಲಿಕವಾಗಿದೆ. ಆಧ್ಯಾತ್ಮ ಹಾಗು ವಿಜ್ಞಾನ ಕೆಲವೊಮ್ಮೆ ಒಂದೇ ಎಂದು ಕಾಣುವಂತಹ ಮಾತನ್ನು ಹೇಳಿದರೂ ಸಹ, ಅವು ಗುಣದಲ್ಲಿ ಬೇರೆಯೇ ಆಗಿರುತ್ತವೆ ಎಂದು ನನಗೆ ಅನಿಸುತ್ತದೆ. ಉದಾಹರಣೆಗೆ, ಶಂಕರಾಚಾರ್ಯರು ತಮ್ಮ ಸ್ತ್ರೋತ್ರವೊಂದರಲ್ಲಿ ‘ಮಾಯಕಲ್ಪಿತ ದೇಶಕಾಲಕಲನಾ’ ಎನ್ನುತ್ತಾರೆ. ಅಂದರೆ ದೇಶ ಹಾಗು ಕಾಲ ಇವು ಮಾಯೆ ಎಂದು. ಈ ವಾಕ್ಯವನ್ನು ಐನ್ ಸ್ಟೈನನ Space and time are relative ಎನ್ನುವ ಮಾತಿಗೆ ಹೋಲಿಸಲು ಹೇಗೆ ಸಾಧ್ಯವಾದೀತು?sunaathhttps://www.blogger.com/profile/13386371953472087631noreply@blogger.com